ಸುಮಾರು 231 ವರ್ಷದ ಹಿಂದೆ ಗುತ್ತಿ ಊರಿನ ಕಡೆ ಒಂದು ಹಳ್ಳಿ. ಕಣ್ಣು ಕಾಣದ ಅಜ್ಜಿ ಮತ್ತು ಕಿವಿ ಕೇಳಿಸದ ( ಕಿವುಡ ) ಅಜ್ಜ ಹಾಗೂ ಕೇವಲ ಗೋಸಿ ಇರುತ್ತದೆ. ತಲೆಯ ಮೇಲೆ ರುಮಾಲು ಇರುತ್ತದೆ. ಇವರು ಗುತ್ತಿಯ ಬೆಟ್ಟವನ್ನು ಕಾಯುತ್ತಿದ್ದರು. ಅವರ ಮನೆ ದೇವತೆಯು ಮುತ್ಯಾಲಮ್ಮ 11 ವರ್ಷದ ಬಾಲೆಗೆ ಬಲುಮೆ ಆಗಿ ಬಳ್ಳಾರಿ ಗಡ್ಡೆ ಸೋಮ ಸಮುದ್ರ ಈಡಿಗರ ಹೊಲದಲ್ಲಿ ಮುತ್ಯಾಲಮ್ಮ ದೇವರು ಇದ್ದಾರೆ. ಅಲ್ಲಿಗೆ ಹೋಗಿ ಎಂದು ಭವಿಷ್ಯ ನುಡಿದಳು. ಅದರ ಪ್ರಕಾರ ದೇವರ ಹರಕೆ ತೀರಿಸಲು ಮನಸ್ಸಾಯಿತು. ಅಜ್ಜಿಯು ಕುಂಭ ಹೊತ್ತುಕೊಂಡು ಅಜ್ಜ ಸೊಂಟದಲ್ಲಿ ಕುಡುಗೋಲು ಸಾಗಿಸಿಕೊಂಡು ಅಲ್ಲಿಂದ ಹೋತುಮರಿ ಮುಂದೆ ಅವರು ಅದರ ಹಿಂದೆ ಬಳ್ಳಾರಿಯ ಕಡೆಗೆ ಪ್ರಯಾಣ ಮಾಡಿದರು. ಹೋತುಮರಿ ಸೋಮ ಸಮುದ್ರ ಮತ್ತು ಕೊಳಗಲ್ಲು ಮಧ್ಯದಲ್ಲಿ ಇರುವ ಈಡಿಗರ ರಾಮಪ್ಪ ಹೊಲದ ಒಳಗೆ ಹೋಯಿತು. ಹೋಗಿ ಎರಡು ಸುತ್ತು ಪ್ರದಕ್ಷಿಣೆ ಮಾಡಿತು. ಆ ಸ್ಥಳದಲ್ಲಿ ಬಲಗಾಲಿನಿಂದ ಕೆದರಿ ಮಲಗಿತು. ಆ.ಸ್ಥಳವನ್ನು ಬಯಲು ಮಾಡಿ ನೋಡಿದಾಗ ಅಲ್ಲಿ ತುಗ್ಗಲಿ ಸಸಿಯು ಇತ್ತು. ಅದಕ್ಕೆ ಕುಂಭವನ್ನು ಮಾಡಿ ಬ್ಯಾಟೆಯನ್ನು ಮಾಡಿ ಬಳ್ಳಾರಿ ಸಮೀಪದಲ್ಲಿರುವ ಅಲ್ಲೀಪುರ ಗ್ರಾಮದ ದಾರದ ಮೀಲ್ ಹತ್ತಿರ ಸೇರಿ ಬಿದಿರು ಕೆಲಸವನ್ನು ಪ್ರಾರಂಭ ಮಾಡಿದರು. ಅಲ್ಲಿಂದ ಮಕ್ಕಳು, ಮೊಮ್ಮಕ್ಕಳು ಕೊಳಗಲ್ಲು ಗ್ರಾಮಕ್ಕೆ ಬಂದು ನೆಲೆಸಿದ್ದರು. ಅಂದಿನಿಂದ ಪ್ರತಿ ವರ್ಷ ಕುಂಭ ಮತ್ತು ಬ್ಯಾಟೆಯನ್ನು ಮಾಡಲು ಪ್ರಾರಂಭಿಸಿದರು. ಆ ಸ್ಥಳವು ದೇವತೆ ಮುತ್ಯಾಲಮ್ಮ ದೇವತೆಯ ಕೃಪೆಯಿಂದ ಆಶೀರ್ವಾದದಿಂದ ಗುಡಿ ನಿರ್ಮಾಣವಾಗಿರುತ್ತದೆ.
ಸ್ಥಳ ದಾನಿಗಳು :- ಈಡಿಗರ ಗೋಪಣ್ಣ s/o ರಾಮಪ್ಪ, ಸೋಮ ಸಮುದ್ರ
ಗುಡಿ ನಿರ್ಮಾಣ ಮಾಡಿಸಿದವರ ಹೆಸರು :- ಲಕ್ಷ್ಮಮ್ಮ w/o ಮುತ್ಯಾಲಪ್ಪ. ಕುರುಗೋಡು ಕೆ. ಪಾಂಡುರಂಗ s/o ಮುತ್ಯಾಲಪ್ಪ. ಕುರುಗೋಡು ಕೆ. ರಂಗಸ್ವಾಮಿ s/o ಮುತ್ಯಾಲಪ್ಪ. ಕುರುಗೋಡು ಕೆ. ದುರುಗಮ್ಮ w/o ಮಲ್ಲಯ್ಯ. ಬಳ್ಳಾರಿ ಕೆ. ಮುತ್ತಯ್ಯ s/o ಮಲ್ಲಯ್ಯ. ಬಳ್ಳಾರಿ.
Hussain Sab
Somasamudra powerful temple muthylamma it's 150 year history is thar......
ಸ್ಥಳ ದಾನಿಗಳು :-
ಈಡಿಗರ ಗೋಪಣ್ಣ s/o ರಾಮಪ್ಪ, ಸೋಮ ಸಮುದ್ರ
ಗುಡಿ ನಿರ್ಮಾಣ ಮಾಡಿಸಿದವರ ಹೆಸರು :-
ಲಕ್ಷ್ಮಮ್ಮ w/o ಮುತ್ಯಾಲಪ್ಪ. ಕುರುಗೋಡು
ಕೆ. ಪಾಂಡುರಂಗ s/o ಮುತ್ಯಾಲಪ್ಪ. ಕುರುಗೋಡು
ಕೆ. ರಂಗಸ್ವಾಮಿ s/o ಮುತ್ಯಾಲಪ್ಪ. ಕುರುಗೋಡು
ಕೆ. ದುರುಗಮ್ಮ w/o ಮಲ್ಲಯ್ಯ. ಬಳ್ಳಾರಿ
ಕೆ. ಮುತ್ತಯ್ಯ s/o ಮಲ್ಲಯ್ಯ. ಬಳ್ಳಾರಿ.